ಖಾಸಗಿ ವ್ಯಕ್ತಿ ಬೇಡಿಕೆ ಇಡುತ್ತಾನೆಂದರೆ ಸಂಶಯಕ್ಕೆ ದಾರಿ, ರಾಜಕೀಯ ವಾಸನೆ ಇದೆ: ಸಂಸದೆ ಶೋಭಾ ಕರಂದ್ಲಾಜೆ | Janata news
ಚಿಕ್ಕಮಗಳೂರು : ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ಸಂಸ್ಥೆ ಗೂ ಏನು ಸಂಬಂಧವಿದೆ.ಅವರು ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ಕುರಿತು ಸಾರಿಗೆ ನೌಕರರು ಯೋಚನೆ ಮಾಡಬೇಕು. ಸಾರಿಗೆ ನೌಕರರ ಹೋರಾಟದಲ್ಲಿ ಖಾಸಗಿ ವ್ಯಕ್ತಿ ಬೇಡಿಕೆಯಿಡುವುದು ಸಂಶಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಕೋಡಿಹಳ್ಳಿ ಅವರ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ, ಇದರ ಹಿಂದೆ ಕಾಂಗ್ರೆಸ್ ಇರುವ ಭಯ ಹಾಗೂ ಸಂಶಯ ನನಗೆ ವ್ಯಕ್ತವಾಗುತ್ತಿದೆ.
ಕಳೆದ ವಾರ ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಿಲ್ ಹಿಡಿದುಕೊಂಡು ಹೋರಾಟಕ್ಕೆ ಬಂದವರು, ಇದಕ್ಕೆ ಕಾಂಗ್ರೆಸ್ಸಿಗರು ಬೆಂಬಲ ಕೊಟ್ಟಿದ್ದರು ಎಂದು ತಿಳಿಸಿದರು. ರೈತ ಹೋರಾಟಗಾರರು ನೌಕರರ ಹೋರಾಟಕ್ಕೆ ಬಂದಿದ್ದಾರೆ.
ಅಂದರೆ ಯಾವುದೋ ರಾಜಕೀಯ ಪಕ್ಷ ಅವರನ್ನ ನಿಯಂತ್ರಿಸುತ್ತಿರುವ ಸಂಶಯ ಉಂಟಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಬಗ್ಗೆ ಹೋರಾಟ ಮಾಡುವ ಬಗ್ಗೆ ನಮಗೆ ಗೌರವ ಇದೆ, ಇವತ್ತು ಸಾರಿಗೆ ನೌಕರರನ್ನ ಲೀಡ್ ಮಾಡುತ್ತಿರುವುದು ಸಂಶಯಕ್ಕೆ ಉಂಟುಮಾಡುತ್ತಿದೆ, ಇದು ಕಾಂಗ್ರೆಸ್ ಪ್ರೇರಿತವಾಗಿ ನಡೆಯುತ್ತಿದ್ದೀಯಾ ಎನ್ನುವ ಅನುಮಾನ ಮೂಡಿದೆ ಎಂದರು.
ಕೋಡಿಹಳ್ಳಿ ರೈತರ ಬಗ್ಗೆ ಹೋರಾಟ ಮಾಡಿದರೆ ಗೌರವ ಇದೆ.ಆದರೆ ಇವತ್ತು ಸಾರಿಗೆ ನೌಕರರ ಹೋರಾಟಕ್ಕೆ ಬೆನ್ನುಲುಬಾಗಿ ನಿಂತಿರುವ ಹಿಂದೆ ಏನೋ ಒಂದು ಕಾರಣವಿರಬಹುದೆಂದರು.
ಸಾರಿಗೆ ನೌಕಕರು ದಾರಿ ತಪ್ಪಬಾರದು. ನಿಮಗೂ ಒಂದು ಬದುಕಿದೆ. ನೌಕಕರೇ ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬ ಇದೆ. ಸರ್ಕಾರ ನಿಮ್ಮ ಜೊತೆ ಇದೆ ನೀವು ನೇರವಾಗಿ ಸಿಎಂ ಹಾಗೂ ಸಚಿವರ ಜೊತೆ ಮಾತಾನಾಡಿ ಸಮಸ್ಯೆ ಪರಿಹಾರಿಸಿಕೊಳ್ಳಬಹುದು. ಸಾರಿಗೆ ನಿಗಮ ನಷ್ಟ ವಾದರೆ ನಿಮಗೆ ತೊಂದರೆಯಾಗುತ್ತದೆ ಎಂದರು.